ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

 

ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

ನವದೆಹಲಿ, ನವೆಂಬರ್ : ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳ 51 ನೇ ಸಮ್ಮೇಳನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದ್ದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವರದಿ ಮತ್ತು ರಾಜಭವನದ ಕಾರ್ಯವೈಕರಿಗಳನ್ನು  ಮಂಡಿಸಿದರು ಹಾಗೂ  ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ರಾಜ್ಯಪಾಲರ 51ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳನ್ನು ಸೇರಿದಂತೆ  ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಪ್ತಕದ ಸಾರ್ಥಕ 15 ವರುಷಗಳ ನಡೆ  ಸಾಂಸ್ಕೃತಿಕ ಬದುಕಿನ ಮುನ್ನಡೆ

ಸಪ್ತಕದ ಸಾರ್ಥಕ 15 ವರುಷಗಳ ನಡೆ ಸಾಂಸ್ಕೃತಿಕ ಬದುಕಿನ ಮುನ್ನಡೆ

 

ಸಪ್ತಕದ ಸಾರ್ಥಕ 15 ವರುಷಗಳ ನಡೆ

ಸಾಂಸ್ಕೃತಿಕ ಬದುಕಿನ ಮುನ್ನಡೆ

ಬೆಂಗಳೂರು :

ದಿನಾಂಕ 7 ರವಿವಾರದ ಸಂಜೆ ಅಲ್ಲಿ ನೆರೆದವರಿಗೆಲ್ಲ “ಸುಶ್ರಾವ್ಯ”ವಾಗಿತ್ತು. ಕಿವಿಗೆ ಇಂಪು, ಕಣ್ಣಿಗೆ ತಂಪು, ಮನಕ್ಕೆ ಮುದ , ಹೊಟ್ಟೆಗೂ ಒಂದಿಷ್ಟು ಹದ! ಥ್ರೀ ಇನ್ ಒನ್ ಕಾರ್ಯಕ್ರಮ. ಸಪ್ತಕ ಸಂಗೀತ ಸಂಸ್ಥೆಯ 15 ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಟ್ಟ “ಸುಶ್ರಾವ್ಯ ಸಂಜೆ”.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸುಂದರ ಹವ್ಯಕ ಸಭಾಗೃಹ ಅಕ್ಷರಶಃ ಕಲಾರಸಿಕರಿಂದ ತುಂಬಿತ್ತು. ಸಂಜೆ 4.30 ಕ್ಕೆ ಖ್ಯಾತ ಯುವ ಗಾಯಕ ಧನಂಜಯ ಹೆಗಡೆಯವರಿಂದ ಸುಶ್ರಾವ್ಯ ಸಂಗೀತ. ರಾಗ ಭೀಮಪಲಾಸದಲ್ಲಿ ಎರಡು ಬಂದಿಶ್ ಮತ್ತು ಒಂದು ದಾಸರ ಪದ. ಸಮಯ ಮಿತಿಯಲ್ಲೇ ಮುಕ್ತಾಯ.

ಎರಡನೇ ಹಂತವಾಗಿ ಸನ್ಮಾನ ಇಬ್ಬರು ಹಿರಿಯ ಪತ್ರರಕರ್ತರಿಗೆ. ಮೂಲತಃ ಇಬ್ಬರೂ ಉತ್ತರ ಕನ್ನಡದವರೆ. ಸದ್ಯ ಬೆಳಗಾವಿಯಲ್ಲಿರುವ ಎಲ್. ಎಸ್. ಶಾಸ್ತ್ರಿ ಮತ್ತು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಸನ್ಮಾನಿಸಿದವರೂ ಮೂಲತಃ ಉತ್ತರ ಕನ್ನಡದವರೇ ಮತ್ತು ಹಿರಿಯ ಪತ್ರರರ್ತರೇ- ಎಂ. ಕೆ. ಭಾಸ್ಕರರಾವ್. ಮೂವರೂ ಮಿತವಾಗಿ ಮತ್ತು ಹಿತವಾಗಿಯೇ ಮಾತನಾಡಿದರು. ಸಪ್ತಕದ ಜಿ. ಎಸ್. ಹೆಗಡೆ ಸ್ವಾಗತಿಸಿ ಪರಿಚಯವಿತ್ತರು. ಒಂದು ಆತ್ಮೀಯ ವಾತಾವರಣದಲ್ಲಿ ನಡೆದ ಕಾರ್ಯಕ್ರಮ.

ಮೂರನೆಯ ಹಂತದಲ್ಲಿ ನಡೆದದ್ದು ಕರಾವಳಿ ಜನರಿಗೆ ಪ್ರಿಯವಾದ ತಾಳಮದ್ದಳೆ – ಪ್ರಸಂಗ: ಸುಧನ್ವ ಮೋಕ್ಷ. ಭಾಗವತರಾಗಿ ಅನಂತ ಹೆಗಡೆ ದಂತಳಿಕೆ, ಮದ್ದಳೆಗಾರರಾಗಿ ಅನಂತ ಪಾಠಕ, ಪುಣೆ , ಕೃಷ್ಣನಾಗಿ ಶಿವಾನಂದ ಹೆಗಡೆ, ಸುಧನ್ವನಾಗಿ ನಾರಾಯಣ ಯಾಜಿ, ರ‍್ಜುನನಾಗಿ ಮೋಹನ ಹೆಗಡೆ ಹೆರವಟ್ಟಾ, ಪ್ರಭಾವತಿಯಾಗಿ ದಿವಾಕರ ಹೆಗಡೆ. ಎರಡು ತಾಸಿನ ಅವಧಿ ನಡೆದ ತಾಳಮದ್ದಳೆಯಲ್ಲಿ ಎಲ್ಲರೂ ತಮ್ಮ ಪಾತ್ರಗಳನ್ನು ಸರ‍್ಥವಾಗಿಯೇ ನರ‍್ವಹಿಸಿದರು. ಭಾಗವತಿಕೆ ಕಿವಿಗೆ ಹಿತಕರವಾಗಿತ್ತಾದರೂ ಮೂರು ನಾಲ್ಕು ಪದ್ಯಗಳು ಶುದ್ಧ ಯಕ್ಷಗಾನೀಯವಾಗಿರಲಿಲ್ಲವೆಂಬುದು ಬೇಸರದ ಸಂಗತಿ.

ಹಾಂ, ನಾಲ್ಕನೆಯ ಒಂದು ಹಂತವೂ ಇತ್ತು. ಅದು ಸುಗ್ರಾಸ ಭೋಜನದ್ದು. ಮೊದಲ ಮೂರು ಹಂತದ ಸಾಂಸ್ಕೃತಿಕ ಸೊಬಗಿಗೆ ಈ ಸವಿಯೂಟ ಸಾಥ್ ನೀಡಿತು.

ಈ ಎಲ್ಲವನ್ನೂ ಅಚ್ಚುಕಟ್ಟಾಗಿ ನರ‍್ವಹಿಸಿದ್ದು ಸಪ್ತಕದ ಸಂಸ್ಥಾಪಕ ಜಿ. ಎಸ್. ಹೆಗಡೆ, ಗೀತಾ ಹೆಗಡೆ, ಧನಂಜಯ ಹೆಗಡೆ ಮತ್ತವರ ಬಳಗದವರು. ಜಿ. ಎಸ್. ಹೆಗಡೆಯವರಿಗೆ ಸಂಘಟನೆ ಬಹಳ ಸಲೀಸು. ಅದರಲ್ಲೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು  ಏರ್ಪಡಿಸುವದು ಬಹಳ ಕಷ್ಟ. ಕಲಾವಿದರ ಬೆಲೆಯೂ ಇಂದು ಬಹಳ ಏರಿದೆ. ಸಹಜ. ಬೆಲೆ ಸಿಗಲೇಬೇಕು. ಆದರೆ ಅದು ಸಂಘಟನೆಗಳ ಆರ್ಥಿಕ ಸಾಸ್ಥವನ್ನು ಅವಲಂಬಿಸಿದ್ದು.

“ಸಪ್ತಕ” ಕಳೆದ ಹದಿನೈದು ರ‍್ಷಗಳಲ್ಲಿ ಅಗಾಧವಾದ ಕೆಲಸ ಮಾಡಿದೆ. ಮೂರೂವರೆ ನೂರರಷ್ಟು ಕಾರ್ಯಕ್ರಮ ನಡೆಸುವದರೊಡನೆ ಉದಯೋನ್ಮುಖ ನೂರಾರು ಕಲಾವಿದರಿಗೆ ಎಲ್ಲ ರೀತಿಯ ಉತ್ತೇಜನ, ಅವಕಾಶಗಳನ್ನು ಒದಗಿಸಿ ಬೆಳೆಸಿದೆ. ರಾಜ್ಯದ ಅಸಂಖ್ಯಾತ ಹಳ್ಳಿಗಳಲ್ಲೂ ಕಾರ್ಯಕ್ರಮ ನೀಡಿದೆ. ಅದರ ಸಾಧನೆ ಬಹಳ ದೊಡ್ಡದು. ಸಂಸ್ಥೆ ಬೆಳ್ಳಿಹಬ್ಬದತ್ತ ಸಾಗಲಿ ಎಂದು ಹಾರೈಸೋಣ.

ಡಾ. ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರವರಿಗೆ ಪದ್ಮಶ್ರೀ ಪ್ರಶಸ್ತಿ

ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರ ರವರಿಗೆ ಪದ್ಮಶ್ರೀ ಪ್ರಶಸ್ತಿ

ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್​ ಸಂಕೇಶ್ವರ್​ಗೆ ಪದ್ಮಶ್ರೀ ಪ್ರಶಸ್ತಿ

 

ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಮಹನೀಯರಿಗೆ 2020ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.

ಕನ್ನಡಿಗ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ.

ದಕ್ಷಿಣ ಕನ್ನಡದ ಅಕ್ಷರ ಸಂತ’ ಹರೇಕಳ ಹಾಜಬ್ಬ, ಕನ್ನಡತಿ ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್, ಪರಿಸರ ಪ್ರೇಮಿ ತುಳಸಿ ಗೋವಿಂದೇಗೌಡ, ಮಾಜಿ ಹಾಕಿ ಪಟು ಎಂಪಿ ಗಣೇಶ್​​ ಮತ್ತು ಉದ್ಯಮಿ ವಿಜಯ್​ ಸಂಕೇಶ್ವರ್​  ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.